05-03-2023 Current Affairs Today

05-03-2023 Current Affairs Today | 05-03-2023 ಇಂದಿನ ಪ್ರಚಲಿತ ಘಟನೆಗಳು

Last Updated on April 15, 2024


⛔️ Related Posts - Apply Now ✅
➤ Group D ನೇಮಕಾತಿ 2023 (Last Date: 28 ನವೆಂಬರ್ 2023) - Click Here
➤ Zilla Panchayat ನೇಮಕಾತಿ 2023 (Last Date: 10 ನವೆಂಬರ್ 2023) - Click Here
➤ ESIC ನೇಮಕಾತಿ 2023 (Last Date: 16 ನವೆಂಬರ್ 2023) - Click Here
➤ Railway ನೇಮಕಾತಿ 2023 (Last Date: 22 ನವೆಂಬರ್ 2023) - Click Here

ಈ ಕೆಳಗಿನ ಪ್ರಶ್ನೆಗಳಿಗೆ ನಿಮ್ಮ ಉತ್ತರವನ್ನು ಸೆಲೆಕ್ಟ್ ಮಾಡಿ ಹಾಗೂ ವಿವರಣೆ ಕೂಡ ಅದೇ ಪ್ರಶ್ನೆಯ ಕೆಳಗೆ ಸಿಗಲಿದೆ. 


Table of Contents

1) ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಕೆ.ಎಂ. ಜೋಸೆಫ್ ನೇತೃತ್ವದ ಪೀಠವು ಹೊರಡಿಸಿದ ಆದೇಶದನ್ವಯ ಈ ಕೆಳಗಿನ ಯಾವ ಆಯ್ಕೆಯು ಸರಿಯಾಗಿದೆ?

Correct! Wrong!

ವಿವರಣೆ: ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಮಹತ್ವದ ಮತ್ತು ದೂರಗಾಮಿ ಪರಿಣಾಮ ಬೀರಬಲ್ಲ ತೀರ್ಪನ್ನು ಇತ್ತೀಚಿಗೆ ನೀಡಿದೆ. ಮುಖ್ಯ ಚುನಾವಣಾ ಆಯುಕ್ತ (ಸಿ.ಇ.ಸಿ) ಮತ್ತು ಚುನಾವಣಾ ಆಯುಕ್ತರನ್ನು (ಇ.ಸಿ) ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ (ಅಥವಾ ಅತಿ ದೊಡ್ಡ ಪಕ್ಷದ ನಾಯಕ) ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯು ಸದಸ್ಯರಾಗಿರುವ ಸಮಿತಿಯ ಸಲಹೆಯಂತೆ ರಾಷ್ಟ್ರಪತಿ ನೇಮಿಸಬೇಕು ಎಂದು ತೀರ್ಪು ನೀಡಿದೆ. ಚುನಾವಣೆಯ ಪರಿಶುದ್ಧತೆಯನ್ನು ಕಾಯ್ದುಕೊಳ್ಳಲು ಇದು ಅಗತ್ಯ ಎಂದು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಪೀಠವು ಹೇಳಿದೆ. NOTE: ಈವರೆಗೆ, ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತ ರನ್ನು ಸಂವಿಧಾನದ 324 ನೇ ವಿಧಿಯ ಅನುಸಾರ ಕೇಂದ್ರ ಸರ್ಕಾರದ ಸಲಹೆ ಯಂತೆ ರಾಷ್ಟ್ರಪತಿ ನೇಮಿಸುತ್ತಿದ್ದರು.

2) ಸುದ್ಧಿಯಲ್ಲಿರುವ “ಸಮರ್ಥ್” ಯೋಜನೆಯು ಭಾರತ ಸರ್ಕಾರದ ಈ ಕೆಳಗಿನ ಯಾವ ಸಚಿವಾಲಯಕ್ಕೆ ಸಂಬಂಧಿಸಿದೆ?

Correct! Wrong!

ವಿವರಣೆ: “ಸಮರ್ಥ್” ಎನ್ನುವುದು ಜವಳಿ ಸಚಿವಾಲಯದ ಬೇಡಿಕೆ ಚಾಲಿತ ಯೋಜನೆಯಾಗಿದ್ದು, ಇದರ ಅನುಷ್ಠಾನದ ಅವಧಿಯನ್ನು ಭಾರತದ ಸರ್ಕಾರವು ಇತ್ತೀಚೆಗೆ ಮಾರ್ಚ್ 2024 ರವರೆಗೆ ವಿಸ್ತರಿಸಿದೆ. ನೂಲುವ ಮತ್ತು ನೇಯ್ಗೆಯನ್ನು ಹೊರತುಪಡಿಸಿ, ಜವಳಿಗಳ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಳಗೊಂಡಿರುವ ಸಂಘಟಿತ ಜವಳಿ ಮತ್ತು ಸಂಬಂಧಿತ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಉದ್ಯಮದ ಪ್ರಯತ್ನಗಳನ್ನು ಉತ್ತೇಜಿಸಲು ಮತ್ತು ಪೂರಕಗೊಳಿಸಲು “ಸಮರ್ಥ್” ಗುರಿಯನ್ನು ಹೊಂದಿದೆ. NOTE: ಜವಳಿ ವಲಯದಲ್ಲಿ ನುರಿತ ಕಾರ್ಮಿಕರ ಉತ್ತಮ ಪೂರೈಕೆಯನ್ನು ನಿರ್ವಹಿಸಲು 2017 ರಲ್ಲಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು “ಸಮರ್ಥ್” ಯೋಜನೆಯನ್ನು ಅನುಮೋದಿಸಿತ್ತು.

Advertisement

3) “ರಶ್ಮಿ ಶುಕ್ಲಾ” ಅವರು ಈ ಕೆಳಗಿನ ಯಾವ ಪಡೆಯ ಮಹಾ ನಿರ್ದೇಶಕರಾಗಿ ಇತ್ತೀಚಿಗೆ ನೇಮಕಗೊಂಡಿದ್ದಾರೆ?

Correct! Wrong!

ವಿವರಣೆ: ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಹಿರಿಯ ಅಧಿಕಾರಿ ರಶ್ಮಿ ಶುಕ್ಲಾ ಅವರನ್ನು ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ದ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಇತ್ತೀಚೆಗೆ ಸರ್ಕಾರಿ ಆದೇಶ ತಿಳಿಸಿದೆ. ಮಹಾರಾಷ್ಟ್ರ ಕೇಡರ್‌ನ 1988ರ ಬ್ಯಾಚ್‌ನ IPS ಅಧಿಕಾರಿಯಾಗಿರುವ ಶ್ರೀಮತಿ ಶುಕ್ಲಾ ಅವರು ಕೇಂದ್ರೀಯ ಮೀಸಲು ಪೊಲೀಸ್‌ಗೆ (CRPF) ನಿಯೋಜನೆಗೊಂಡಿದ್ದರು. NOTE: ಸಶಸ್ತ್ರ ಸೀಮಾ ಬಲ ಎಂಬುದು ನೇಪಾಳ ಮತ್ತು ಭೂತಾನ್ ಗಡಿಯಲ್ಲಿ ನಿಯೋಜಿಸಲಾದ ಗಡಿ-ಕಾವಲು ಪಡೆ.

4) ಆಸ್ಟ್ರೇಲಿಯಾದ ಪ್ರಮುಖ ವಿಶ್ವವಿದ್ಯಾನಿಲಯವಾಗಿರುವ ಡೀಕಿನ್ ವಿಶ್ವವಿದ್ಯಾಲಯವು ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ತನ್ನ ಶಾಖೆಯನ್ನು ಸ್ಥಾಪಿಸುತ್ತಿದೆ ಮತ್ತು ಈ ಮೂಲಕ ಭಾರತದಲ್ಲಿ ತನ್ನ ಶಾಖೆಯನ್ನು ಸ್ಥಾಪಿಸಲಿರುವ ಮೊದಲ ವಿದೇಶಿ ವಿಶ್ವವಿದ್ಯಾಲಯವಾಗಲಿದೆ?

Correct! Wrong!

ವಿವರಣೆ: ಆಸ್ಟ್ರೇಲಿಯಾದ ಪ್ರಮುಖ ವಿಶ್ವವಿದ್ಯಾನಿಲಯವಾಗಿರುವ ಡೀಕಿನ್ ವಿಶ್ವವಿದ್ಯಾಲಯವು (The Deakin University) GIFT ಸಿಟಿ ಗುಜರಾತ್ ನಲ್ಲಿ ತನ್ನ ಅಂತರಾಷ್ಟ್ರೀಯ ಶಾಖೆಯನ್ನು ಸ್ಥಾಪಿಸಲು ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ (IFSCA) ಅನುಮೋದನೆಯನ್ನು ಪಡೆದಿದೆ. ಈ ಮೂಲಕ ಡೀಕಿನ್ ವಿಶ್ವವಿದ್ಯಾಲಯವು ಭಾರತದಲ್ಲಿ ತನ್ನ ಶಾಖೆಯನ್ನು ಸ್ಥಾಪಿಸಲಿರುವ ಮೊದಲ ವಿದೇಶಿ ವಿಶ್ವವಿದ್ಯಾಲಯವಾಗಲಿದೆ.

Advertisement

5) “ವೋ ವ್ಯಾನ್ ಥುಂಗ್” ಅವರು ಈ ಕೆಳಗಿನ ಯಾವ ರಾಷ್ಟ್ರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

Correct! Wrong!

ವಿವರಣೆ: ಮಾರ್ಚ್ 2, 2023 ರಂದು, ವಿಯೆಟ್ನಾಂನ ಸಮಾಜವಾದಿ ಗಣರಾಜ್ಯದ ರಾಷ್ಟ್ರೀಯ ಅಸೆಂಬ್ಲಿ (NA) ವಿಯೆಟ್ನಾಂನ ಹೊಸ ಅಧ್ಯಕ್ಷರಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ವಿಯೆಟ್ನಾಂನ ಪಾಲಿಟ್‌ಬ್ಯೂರೋ ಸದಸ್ಯ ವೋ ವ್ಯಾನ್ ಥುಂಗ್ (Vo Van Thuong) ಅವರನ್ನು ಆಯ್ಕೆ ಮಾಡಿದೆ. 2026 ರವರೆಗೆ ಅವಧಿಗೆ ಇವರು ಆಯ್ಕೆಯಾಗಿದ್ದಾರೆ.ಹೆಚ್ಚಿನ ಮಾಹಿತಿಗಾಗಿ: ವಿಯೆಟ್ನಾಂ ಬಗ್ಗೆ: Ø ಪ್ರಧಾನ ಮಂತ್ರಿ - ಫಾಮ್ ಮಿನ್ಸ್ ಚಿನ್ Ø ಕ್ಯಾಪಿಟಲ್ - ಹನೋಯಿ Ø ಕರೆನ್ಸಿ - ವಿಯೆಟ್ನಾಂ ಡಾಂಗ್

6) “ಸುಲ್ತಾನ್ ಅಲ್ ನೆಯಾದಿ” ಎಂಬುವವರು ನಾಸಾದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಈ ಕೆಳಗಿನ ಯಾವ ರಾಷ್ಟ್ರದ ಮೊದಲ ಗಗನಯಾತ್ರಿಯಾಗಿದ್ದಾರೆ?

Correct! Wrong!

ವಿವರಣೆ: ನಾಸಾದ ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾಗಿ, ಸ್ಪೇಸ್‌ಎಕ್ಸ್ ಸಂಸ್ಥೆಯು ನಾಲ್ವರು ಗಗನಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸಿತು. ಪೂರ್ವ ಕರಾವಳಿಯಲ್ಲಿರುವ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಗಗನನೌಕೆಯನ್ನು ಹೊತ್ತ ರಾಕೆಟ್ ನಭದತ್ತ ಚಿಮ್ಮಿತು. ರಷ್ಯಾ ಹಾಗೂ ಅಮೆರಿಕದ ಗಗನಯಾತ್ರಿಗಳ ಜೊತೆ, ಇದೇ ಮೊದಲ ಬಾರಿಗೆ ಸಂಯುಕ್ತ ಅರಬ್ ಸಂಸ್ಥಾನಗಳ (ಯುಎಇ) ಸುಲ್ತಾನ್ ಅಲ್ ನೆಯಾದಿ ತಂಡದಲ್ಲಿದ್ದಾರೆ.

Advertisement

7) ಇತ್ತೀಚಿಗೆ ನಿಧನರಾದ “ಲೂಯಿಸ್ ಫಾಂಟೇನ್” ಅವರು ಈ ಕೆಳಗಿನ ಯಾವ ಕ್ರೀಡೆಯೊಂದಿಗೆ ಸಂಬಂಧಿಸಿದ್ದಾರೆ?

Correct! Wrong!

ವಿವರಣೆ: ಫ್ರಾನ್ಸ್ ಫುಟ್‌ಬಾಲ್ ತಂಡದ ದಿಗ್ಗಜ ಸೈಕರ್ ಜಸ್ಟ್ ಲೂಯಿಸ್ ಫಾಂಟೇನ್ ಇತ್ತೀಚೆಗೆ ನಿಧನರಾದರು. 1958 ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅವರು ಗಳಿಸಿದ್ದ 13 ಗೋಲುಗಳ ಸಾಧನೆ ಅವಿಸ್ಮರಣೀಯವಾಗಿದೆ. ಏಕೆಂದರೆ ಆರು ಪಂದ್ಯಗಳಲ್ಲಿ ಅವರು ಮಾಡಿದ್ದ ದಾಖಲೆಯನ್ನು ಮುರಿಯುವುದು ಬಹುಕಾಲದವರೆಗೆ ಸಾಧ್ಯವಾ ಗಿರಲಿಲ್ಲ. ಇದುವರೆಗೂ ಜಸ್ ಅವರಿಗಿಂತ ಹೆಚ್ಚು ಗೋಲು ಗಳಿಸಿದವರು ಮೂವರು ಆಟಗಾರರು ಮಾತ್ರ.

8) ಭಾರತದ ರಾಷ್ಟ್ರಪತಿಯವರು ಅಂತರರಾಷ್ಟ್ರೀಯ ಧರ್ಮ - ಧಮ್ಮ ಸಮ್ಮೇಳನವನ್ನು ಎಲ್ಲಿ ಉದ್ಘಾಟಿಸಿದರು?

Correct! Wrong!

ವಿವರಣೆ: ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇತ್ತೀಚೆಗೆ (ಮಾರ್ಚ್ 3, 2023) ಭೋಪಾಲ್‌ನಲ್ಲಿ ಸಾಂಚಿ ಬೌದ್ಧ-ಇಂಡಿಕ್ ಸ್ಟಡೀಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇಂಡಿಯಾ ಫೌಂಡೇಶನ್ ಆಯೋಜಿಸಿದ 7 ನೇ ಅಂತರರಾಷ್ಟ್ರೀಯ ಧರ್ಮ - ಧಮ್ಮ ಸಮ್ಮೇಳನವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಆಧ್ಯಾತ್ಮದ ಮಹಾನ್ ಆಲದ ಮರವು ಭಾರತದಲ್ಲಿ ಬೇರು ಬಿಟ್ಟಿದ್ದು, ಅದರ ಕೊಂಬೆ ಬಳ್ಳಿಗಳು ಪ್ರಪಂಚದಾದ್ಯಂತ ಹರಡಿಕೊಂಡಿವೆ ಎಂದು ನುಡಿದರು.

Advertisement

9) ಇತ್ತೀಚಿನ ವರದಿಯನ್ವಯ ಶುದ್ಧ ಇಂಧನವನ್ನು ಅಳವಡಿಸಿಕೊಳ್ಳುವಲ್ಲಿ ಭಾರತದ ಈ ಕೆಳಗಿನ ಯಾವ ಎರಡು ರಾಜ್ಯಗಳು ಅಗ್ರಸ್ಥಾನದಲ್ಲಿವೆ?

Correct! Wrong!

ವಿವರಣೆ: ಶುದ್ಧ ಇಂಧನವನ್ನು ಅಳವಡಿಸಿಕೊಳ್ಳಲು ಕರ್ನಾಟಕ, ಗುಜರಾತ್ ಅಗ್ರ ಭಾರತದ ರಾಜ್ಯಗಳಾಗಿವೆ. ಕರ್ನಾಟಕ ಮತ್ತು ಗುಜರಾತ್ ಶುದ್ಧ ವಿದ್ಯುತ್ ಪರಿವರ್ತನೆಯಲ್ಲಿ ಗರಿಷ್ಠ ಪ್ರಗತಿ ಸಾಧಿಸಿವೆ. ಆದರೆ, ಇನ್‌ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಶಿಯಲ್ ಅನಾಲಿಸಿಸ್ (ಐಇಇಎಫ್‌ಎ) ಪ್ರಕಟಿಸಿದ ಜಂಟಿ ವರದಿಯ ಪ್ರಕಾರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಯುಪಿಯಂತಹ ರಾಜ್ಯಗಳು ಈ ಕ್ಷೇತ್ರದಲ್ಲಿ ತೀರಾ ಹಿಂದುಳಿದಿವೆ.

10) ಇತ್ತೀಚೆಗೆ “ಅಂತರರಾಷ್ಟ್ರೀಯ ಯೋಗ ಉತ್ಸವ – 2023” ಎಲ್ಲಿ ಪ್ರಾರಂಭಿಸಲ್ಪಟ್ಟಿದೆ?

Correct! Wrong!

ವಿವರಣೆ: 2023 ರ ಮಾರ್ಚ್ 1 ರಿಂದ ಮಾರ್ಚ್ 7 ರವರೆಗೆ ರಿಷಿಕೇಶದಲ್ಲಿ ಅಂತರರಾಷ್ಟ್ರೀಯ ಯೋಗ ಉತ್ಸವ – 2023 ನಡೆದಿದೆ. ಅಂತರರಾಷ್ಟ್ರೀಯ ಯೋಗ ಉತ್ಸವ - 2023 ಈ ವರ್ಷದ ಭಾರತ್ ಪರ್ವ್ ನ ಪ್ರಮುಖ ಆಕರ್ಷಣೆಯಾಗಿದೆ. ಇದು ಆರು ದಿನಗಳ ಕಾರ್ಯಕ್ರಮವಾಗಿದ್ದು, ರಾಜ್ಯದ ಶ್ರೀಮಂತ ಪರಂಪರೆ ಮತ್ತು ವೈವಿಧ್ಯಮಯ ನೈಸರ್ಗಿಕ ಅದ್ಭುತಗಳನ್ನು ಉತ್ತೇಜಿಸುತ್ತದೆ.

ಪ್ರಚಲಿತ ಘಟನೆಗಳು 05-ಮಾರ್ಚ್-2023
ಧನ್ಯವಾದಗಳು
ಈ ಎಲ್ಲಾ ಪ್ರಶ್ನೆಗಳ ವಿವರಣೆ ಸಹಿತ ಪಿಡಿಎಫ್ ಅನ್ನು ಇದೇ ಪೋಸ್ಟ್ ಕೆಳಗಡೆ ನೀಡಲಾಗಿದೆ, ಅವಶ್ಯಕತೆ ಇದ್ದಲ್ಲಿ ಡೌನ್ಲೋಡ್ ಮಾಡಿಕೊಂಡು ಓದಬಹುದು ಅಥವಾ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು. Play Again! ಮೇಲೆ ಕ್ಲಿಕ್ ಮಾಡಿ ಈ ಪ್ರಚಲಿತ ಘಟನೆಗಳ ಕ್ವಿಜ್ ಅನ್ನು ಇನ್ನೊಮ್ಮೆ ಅಟೆಂಡ್ ಮಾಡಬಹುದು..!!

05-03-2023 Current Affairs Today PDF Download | Today Current Affairs PDF in Kannada | Today Current Affairs PDF Download | Current Affairs Today PDF | Today Current Affairs PDF

 

Classic Kannada is a unique Online Education Website, which provides useful PDFs for aspirants, who are preparing for competitive exams in the Karnataka State or in the Other States. All these PDFs are in Kannada or English Language only, and one thing all PDFs are provided here (Classic Kannada Website) for Education purposes only. Please utilize these PDFs in that manner and don’t sell them to others and don’t make these files Commercial. We requesting all of our readers respect our Hard Work while collecting these Files on the Internet. Our Intention is to provide FREE Study Materials for all Competitive exam aspirants and we believe Education should be FREE FOR ALL, and for the same reason, we provided everything and gathered it in one place.

 

PDF Overview
Topic / File Name:05-03-2023 Current Affairs Today PDF
Institute Name:Collected By Classic Kannada
File Category:Current Affairs
File Updated on:05-March-2023
File Format:PDF
Is Scanned Copy:Yes
Is Text Editable:No
File Language:Kannada
Password Protected:No
Copy Text:No
Print Enable:Yes
File No. of Pages:08 Pages
File Size:02 MB
PDF Quality:High
PDF Cost:FREE
File / PDF Download Link:Yes Available, Download Link Given Below

 

How to Download Today Current Affairs 05-03-2023 PDF
ContentDownload Link
05-03-2023 Today Current Affairs PDFDOWNLOAD PDF
04-03-2023 Yesterday Current Affairs PDF
CLICK HERE
WhatsApp Group:JOIN GROUP
Telegram Channel:

ಟೆಲಿಗ್ರಾಂ ಗೆ ಸೇರಿಕೊಳ್ಳಿ

 

Affiliate Disclosure: In full transparency – some of the links on this website are affiliate links, if you use them to make a purchase we will earn a commission at no additional cost to you (none whatsoever!). Will this be a problem? This is how we manage to create free content for you. Please know that your trust is so important to us. If we recommend anything, it is always because we believe it is worth exploring. And, buy me a coffee ☕️

 

Disclaimer: ClassicKannada.com doesn’t own these Study Materials, E-Books, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet also we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. If you still, feel that something should not be on our website, or If anyway you feel that our content violates any Copyright or Privacy Policy laws, or If you have any issues, please contact us through email: [email protected] we will certainly try and provide the best solution for the issues. Thank you.

Udyoga Plus / administrator

Udyoga Plus - Job News in Kannada

Leave a Reply

Your email address will not be published. Required fields are marked *